ಕನ್ನಡಿಗ

ಹಸಿರು ಪೈರು ನಗುವ ನೆಲದಲಿ
ನೇಗಿಲ ಹೊತ್ತ ರೈತನಂತೆ
ಕಚ್ಚೆ ಕಟ್ಟಿ ತಿಲಕವಿಟ್ಟು
ಧೀರ ನೀನಾಗಬೇಕು ಕನ್ನಡಿಗ ||

ಕಳೆಯ ತೆಗೆದು ಸ್ವಚ್ಛವಾದ
ಹೊಲದ ಪರಿಯು ನಿನ್ನ ಮನಸು
ತಾಯ ಸೇವೆ ಮಾಡಲೆಂದು ಹೂವಾಗಿ
ಅಣಿಯಗೊಳಿಸು ಕನ್ನಡಿಗ ||

ನಾಡ ಮಣ್ಣ ಬಸಿರಿನಲ್ಲಿ
ಹುಟ್ಟಿದ ನೀನು ಮುಂದೆ ಬೆಳೆದು
ತಾಯಿ ನುಡಿಯ ಉಳಿಸಿ ಬೆಳೆಸಿ
ಧೀರ ನೀನಾಗಬೇಕು ಕನ್ನಡಿಗ ||

ಪಂಪ ರನ್ನ ಕುಮಾರ
ವ್ಯಾಸರ | ನೆಲ ಕಣ್ಣು
ನೀನು ಅವರ ಮನದ
ದೀವಿಗೆ ನೀನಾಗಬೇಕು ಕನ್ನಡಿಗ ||

ಸಾವಿರ ಸಾವಿರ ವರ್ಷಗಳ
ಇತಿಹಾಸ ನಮ್ಮದು
ಅದರ ಕಣಕಣದಲಿ
ಬೆರೆತ ಭಾವದುಸಿರು ನೀನಾಗಬೇಕು ಕನ್ನಡಿಗ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೯ನೆಯ ಖಂಡ – ನಿರಾಶಾಮಯ ಆಶಾ
Next post ಹಿಮಗಾನ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys